Friday, August 14, 2020

ಕಪ್ಪು ಬಿಳಪು

ಕಪ್ಪು ಬಿಳಪು 

ಎರಡರಲ್ಲೊಂದು.  

ಕಪ್ಪೋ 

ಬಿಳಿಪೊ.  

ಹಂಡ ಹುಂಡ.  

ಅರ್ಧ  ಪೂರ್ತಿ . 

ಅಲ್ಲಿ ಇಲ್ಲಿ . 

ಜೀವನ ಸವದಂತೆ ,

ಎರಡು ಕಲಸಿ 

ಮಬ್ಬಾಗಿ ಮೋಡದ ಬಣ್ಣ ಬಂದು . 

ಬೇವು ಬೆಲ್ಲ ಕಲಸಿ 

ಮೂರನೇ ರುಚಿ ಹುಟ್ಟಿ 

ಈ ನಡುವಿನ ರುಚಿ 

ಈ  ಕಲಸಿದ ಬಣ್ಣ 

ಬಾಳೆಲ್ಲ ಹರಡಿ 

ಕೊನೆಗೊಮ್ಮೆ ತಿಳಿದೆ 

ನಾ ಅನ್ಕೊಂಡ ಚಿತ್ರಪಠ ಮೂಡದೆ 

ಹೊಸ ರುಚಿಯಂದು

ಹೊಸ ಬಣ್ಣವೊಂದು

ಬಂದು 

ನಿತ್ಯ ಸತ್ಯವಾಯ್ತು . 


Saturday, August 01, 2020

ನಗುವ ಕಡಲಲ್ಲಿ

ಅಳುವ ಕಡಲೊಳು
ತೇಲಿ ಬರುತಿದೆ
ನಗೆಯ ಹಾಯಿ ದೋಣಿ

ದೋಣಿಯಲಿ ಕುಳಿತ
ಹುಡುಗಿ ದಿಂಗಂತ
ನೋಡಿ ನೀರಿನಲಿ ]
ಕೈ ತೀಡಿ
ಕಿರುನೋಟದಿ
ಕಿರಿ ಹಿಡಿದು
ನೋಡಿದಳ್ .

ಎಲ್ಲೊಲ್ಲೂ
ಅಳುವೇ ?
ತಳವೇ
ಇಲ್ಲವೇ ?

ಆಕೆ  ಮುಳುಗುವ
ಸೂರ್ಯನಾ ನೋಡಿ
ಗಂಟಲ ತಿದ್ದಿ
ಮನದಲೇನೋ
ನಾಂದಿ ಮಾಡಿ
ಹಾಡಿದಳ್

ರಾಗ ಯಾವುದು
ನಾನು ಅರಿಯೆ. 
ಅರುಣ ಅಲ್ಲೇ ನಿಂತು
ಆಲಿಸಿದ .
ಭೋರ್ಗರೆಯುವ ಶರಧಿ
ಶಾಂತವಾಗಿ ಕಿವಿಗೊಟ್ಟಿತು
ರಾಗಕ್ಕೆ ತಾಳಕ್ಕೆ ಲಯವಾಗಿ
ಅಲೆಗಳು ಏರಿಳಿಯುತ್ತಿತ್ತು. 

ಒಂದೊಂದು ಹನಿ
ಯಾವುದೊ ಸುಖದಲ್ಲಿ
ನೆನೆಯುತ್ತಿತ್ತು
ರಾಗ ಒಳಗೆ ಹೊರಗೆ ಅರಿವಲ್ಲದೆ
ಹೊಯ್ದಾಡುತಿತ್ತು

ನಗುವ ಕಡಲಲ್ಲಿ
ತೇಲಿ ಹೋಗುತ್ತಿತ್ತು
ನಗೆಯ ಹಾಯಿ ದೋಣಿ . 




ಯಾವ ಮೋಹನ ಮುರಳಿ ಕರೆಯಿತು

ಯಾವ ಮೋಹನ ಮುರಳಿ
ಕರೆಯಿತು ದೂರ ತೀರಕೆ
ನಿನ್ನನು

ಕರೆದ ನಂತರ ಏನು
ಆಯಿತು
ಯಾರು ಅರಿಯರು!

ದೂರ ತೀರದಿ
ನಾನು ಹೋದೆ
ಏನೋ ಕನಸು
ಕಂಡು.

ಹೊಸ ಜಾಗ
ಹೊಸ ವಾಸನೆ
ಎಲ್ಲಿ ನೋಡಿದರು
ಹೊಸತನ.

ನಾನು ಹೇಳದೆ
ಯಾರು ಕೇಳದೆ
ತುಟಿಯ ಮೇಲೆ
ನಗುವ ಬಳಿದು,
ನಾಟ್ಯದ ಮಾಟದ
ನೆಡೆಯಲಿ ತೀರದ
ಮರಳ ಮೇಲೆ
ಗುಣುಗುಣು ಅನ್ನುತ್ತಾ
ತೇಲಿ ತೇಲಿ ನೆಡೆದೆ .

ದೊಡ್ಡ ಕಷ್ಟ
ಸಣ್ಣದಾಗಿ, ಸಣ್ಣ ಸುಖ
ದೊಡ್ಡದಾಗಿ
ಜಗವೆಲ್ಲ ಮಜವಾಗಿ
ಮುರಳಿ ಕರೆ
ಕೇಳಿ
ಈ ದೂರ ತೀರಕೆ ಬಂದ
ನನಗೊಂದು ಧನ್ಯತಾ ಭಾವ. 

ದಿನಗಳು ಕಳೆದವು
ಹಕ್ಕಿ ಹಾರಿತು
ನೀರು ಹರಿಯಿತು
ಅಲೆಗಳ ಮೇಲೆ ಅಲೆಗಳು
ಬಂದು ಹೋದವು. 
ಹೊಸತನ ಕಳೆದು
ಎಕಾನತೆ ಬಂದು
ಸಣ್ಣ ತೊಂದರೆ
ದೊಡ್ಡ ಕೊರಗು
ಆಗಲು .

ನಾನಿಲ್ಲಿ ಬಂದು
ಕಾಯುತಿರುವೆ
ಮುರಳಿ ಕರೆಗೆ
ದೂರ ತೀರಕೆ
ಹೋಗಲು.

Saturday, July 25, 2020

ಪಶ್ಚಾತಾಪ

ಅವಳ ನೋಡದಾಗೆಲ್ಲ
ತಲೆ ಒಳಗೆ ಮೆದಳು
ತಿರುಗಿ ಮತ್ತೆ
ಸರಿ ಮಾಡಿಕೊಂಡು
ಕುತ್ಕೊಳ್ಳತ್ತೆ .

ನಿದಾನ ನಡಿಗೆ
ಉದ್ದ ಗಿಡ್ಡ
ಕಾಲು
ಒಂದ್ಕಾಲ ಚಪ್ಪಲಿ
ಸವೆದು. 

ಕೈ ಹೋಗದ ಜಾಗದಲ್ಲೆಲ್ಲಾ
ಬಿಳಿ ಬಿಳಿ .
ಬಾಕಿ ತಲೆ ಕೂದಲು
ಮೆಹಂದಿ ರಂಗು .

ಇತ್ತೀಚಿಗೆ ಕನ್ನಡಕದ
ಗೋಲ  ಬಂದಿದೆ. 
ಮುಖದ ಮೇಲೆ
ಮತ್ತೊಂದು ಪದರು. 

ಅವಳ ನಗು ಎಲ್ಲಿ
ಶುರುವಾಗತ್ತೆ ಅಂತ
ಹೇಳೋದು ಕಷ್ಟ
ಆದರೆ ಮೊನಾಲಿಸಾ ತರ !
ಸ್ವಲ್ಪ ಸಕ್ಕರೆ ಬೇಕು ಅನಿಸುವ
ಕಾಫಿ  ತರ .

ಆ ಒಂದು ಬೆಳೆಗ್ಗೆ 
ರಸ್ತೆಯಲ್ಲಿ ಸಿಕ್ಕಳು  
ನಿಂತು 
ಮಾತಾಡಿಸದಳು 
ಮಾತೆಲ್ಲ ತೇಲಿಸಿದಳು 
 ಎರಡು
ಮಾತಿನ ನಂತರ
ನನ್ನ ಮಾತು ಮುಗಿದು
ದೇಶಾವರಿ ನಗು ನಕ್ಕು
ಬೆಳಿಗ್ಗೆ ಬೆಳಿಗ್ಗೆ
ಇವಳ್ಯಾಕೆ ಸಿಕ್ಕಳು
ಅಂತ ಹಳಿಯುತ್ತಾ
ಬೀಸುಗಾಲು ಹಾಕುತ್ತ
ಅಲ್ಲಿಂದ ದೂರ
ನೆಡೆದೆ.


ಈಗ ನಂಗೆ
ಕಹಿ ಕಹಿ
ಇಕ್ಕಟ್ಟು
ಸಣ್ಣ ಅಂಗಿ ಹಾಕಿದಾಗ
ಕಂಕಳಲ್ಲಿ ತರೆದಂಗೆ ,
ಮೆದುಳಿನ ಆ ಮೂಲೆ
ಈ ಬಿರಕಿನಲಿ
ಅವಳ ನಗು ಸಿಕಾಹ್ಕಿಕೊಂಡು
ಗಂಟಲು ಕ್ಯಾಕರಿಸಿದೆ
ಸಂಕಟ ಹೋಗದು
ನ ಯಾರೋ ಅವಳು ಯಾರೋ
ಎಂದು ಸಮಾಧಾನ ಮಾಡ್ಕೊಂಡೆ .


ಆದ್ರೆ ಸ್ವಾಮಿ
ತಪ್ಪು ಆಗ್ಬಿಟ್ಟಿದೆ. 
ನಾಕು ಒಳ್ಳೆ ಮಾತಾಡ್ಬೇಕಿತ್ತು ,
ನನ್ನ ಗಂಟೇನು ಹೋಗೋತಿತ್ತು
ಈಗ ಈ ಗೋಡೆ ಆ ನೆಲ
ಎಲ್ಲ ನನ್ನ ದುರು ದುರು
ನೋಡಕ್ಕ ಹಿಡಿದ್ಯಾವ.
ದೇವ್ರಿಗೆ ಎರಡು ಕಾಯ
ಒಡೆದರೂ ಅದರಲ್ಲಿ
ಒಂದು ಕಾಯಿ ಹಾಳು.

ಈಗ ಸಂಜೆ
ನನ್ನೊಳಗೆ ಸುಂಟರ  ಗಾಳಿ
ಜೋರಾಗಿದೆ.
ಹೊಟ್ಟೆಲೆಲ್ಲ ತೋಳಸ್ತಾ ಇದೆ .
ಊಟ ಸೇರಲ್ಲ
ನಿದ್ರೆ ಬಾರದ ಆ ರಾತ್ರಿ
ಬ್ರಹ್ಮ ರಾಕ್ಷಸನಾಗಿ
ಕಾಯ್ತಾ ಇದೆ. 

ಎರಡು ಮಾತು
ನಗುನಗುತಾ
ಆಡಿದ್ದರೆ?

ಹುಂಬ

ನಾನೊಬ್ಬ ಹುಂಬ
ನಿಂತಲ್ಲಿ ಕಂಬ
ನನ್ನ ನೆಲೆ ಬಿಟ್ಟು
ಆಚೀಚೆ ಹಂದೆ !

ಯಾರ ಹೇಳಿದರು
ಕೇಳದ ಕೊರಡು

ಇವರಿಗೇನು ಗೊತ್ತು
ಬರೀ ಖಾಲಿ ಹೊಟ್ಟು

ನನಗೇನು ಗೊತ್ತಿಲ್ಲ
ಅನ್ನುತ್ತಾ ...
ಒಳಒಳಗೆ
ನಂಗೆಲ್ಲ ಗೊತ್ತು
ಎಂದು ಬೀಗುತ್ತ
ಕಟ್ಟೆ ಮೇಲೆ
ಕೈ ಕಟ್ಟಿ ಕುಳಿತೆ. 

ನದಿಯಾಚೆ
ಕಡಲಾಚೆ
ಗುಡ್ಡದಾಚೆ ಏನುಂಟು
ಯಾರು ಕಂಡವರು ?
ತುಂಬಾ ಏನೇನೂ
ಇದೆ ಎಂದು
ಹೇಳುವರು ಉಂಟು.
ಕಾಣದೆ ಇರುವುದು
ಏನುಇಲ್ಲಾ .
ಎಂದು ಹೇಳುವ ಹುಂಬ
ನಾನೊಬ್ಬ.

Saturday, July 18, 2020

ಸೋಲು

ಸೋಲು
ಸೋಲಿನ ರುಚಿ ಸಿಹಿ!
ಸಿಹಿ ಸಿಹಿ ಸಿಹಿ
ಮೂರು ಸಲ
ಹೇಳಿದೆ
ಸಿಹಿ.

ನೀನೇಕೆ
ಕೇಳಬಯಸಿದೆ
ಕಹಿ?

ಹಲವು ಸಲ
ಸೋತೆ
ಮೊದಲು
ಕಚ್ಚಾ ಕಹಿ
ನಂತರ ಬರೀ ಕಹಿ
ಆಮೇಲೆ ಸಪ್ಪೆ
ಮತ್ತೊಮ್ಮೆ ಸೋತೆ
ಆಗ ಸಿಹಿ
ಕಹಿ ಹೋಗಿ ಸಿಹಿ.

ನಂಗೆ ಗೊತ್ತಿಲ್ಲ
ನಾ ಯಾವಾಗಾದರೂ
ಗೆದ್ದರೆ
ನನ್ನ ಬಾಯೆಲ್ಲ
ಕಹಿ ಕಹಿ!. 

Tuesday, July 07, 2020

ಒಳ ನೋಟ

ನಂಗೆ ನನ್ನ ಕಂಡರೆ
ಇಷ್ಟ ಇಲ್ಲ 
ಯಾಕೆ ಗೊತ್ತಿಲ್ಲ.

ಕನ್ನಡಿ ನೋಡದಾಗೆಲ್ಲ
ಬೇಜಾರು.
ಅವರು ಇವರು
ಹೊಸದು ತಂದಾಗೆಲ್ಲಾ
ನನಗೇಕೋ ಕಸಿವಿಸಿ.

ನಲಿಗೆ ತುದಿಯಲ್ಲಿ
ಕೊನೆಯಲ್ಲಿ
ಎಲ್ಲಾ
ಕಹಿ ಕಹಿ. 

ಹೋಗಲಿ ಬಿಡಿ
ನಾಯಾಕೆ ಅಲಕ್  ನಿರಂಜನ್
ಆಗಿ ಎಲ್ಲ ಬಿಟ್ಟು
ಆರಾಮಾಗಿ ಇರಬಾರದು ?

ಅದೂ ಆಗಿಲ್ಲ .
ಬಿಡಲು ಆಗದೆ
ಹಿಡಿಯಲು ಆಗದೆ
ಎಡಬಿಡಂಗಿ ಆಗ್ಬಿಟ್ಟೆ .

ಪುಸ್ತಕ ಓದಿದೆ.
ತರ್ಕ ಮಾಡಿದೆ .
ದೊಡ್ಡವರ ವಚನನೂ
ಕೇಳ್ದೆ ,

ಆದ್ರೇನು
ಹಾಳು ಮನಸ್ಸು
ಕಗ್ಗ ಎಮ್ಮೆ ತರ
ಎಲ್ಲಿನ್ದಎಲ್ಲಿಗೆ
ಎಳೆದು ಎಳೆದು
ಮನ್ಸಒಳಗೆಲ್ಲ ತರಚಿ
ಒಂತರ ಉರಿ
ಹರಡಿಕೊಂಡು
ಗೋಳು ಹೊಯಿತಿದೆ. 

ನಾಳೆಯಿಂದ ಧ್ಯಾನ
ಮಾಡಬೇಕು. 
ಮನಸಿನೊಳಗೆ
ಶಾಂತಿ ತರಬೇಕು. 
ನನ್ನ ನಾನು
ಪ್ರೀತಿ ಮಾಡಬೇಕು. 

ಎಲ್ಲಿ ಇರುವೆ
ಕಗ್ಗ ಗುರುವೇ
ನೀನೆ ಒಂದು
ದಾರಿ ದೀಪ. 

Sunday, July 05, 2020

" ಇರುವದೆಲ್ಲವ ಬಿಟ್ಟು "

" ಇರುವದೆಲ್ಲವ ಬಿಟ್ಟು "
ಧರೆಯ ಮೇಲೆ ಧಾರೆ
ಕಲ್ಲು ಮಣ್ಣು ಎಲ್ಲ
ಒದ್ದೆ
ಕಿವಿಯಲ್ಲಿ ಏಕತಾನ

ಹಳೆಯ ಹಾಡು,
ಹಳೆಯ ನೆನಪು,
ಕಾಡುವ ಕಾಲ. 

ಮುಗ್ಗುಲು ವಾಸನೆ
ಬಿಸಿನೀರ ಸ್ನಾನ
ಹಬೆಯ ಕಾಪಿ.

ಒಂದೇ ಸಮನೆ
ಬೇಸರ ಇಲ್ಲದೆ
ಈ ಧಾರಾಕಾರ. 

ರಣಬೇಸಿಗೆಯಲಿ
ಹುಡುಕಿದೆ ತಂಪಾದ
ಹನಿ ಮಳೆ
ಈಗ ಮಳೆಗಾಲದ ಕತ್ತಲೆ
ಕಳೆದು , ಮೋಡ ಹರಿದು
ಸೂರ್ಯನ ನೋಡುವ ತವಕ. 

" ಇರುವದೆಲ್ಲವ ಬಿಟ್ಟು "

Tuesday, June 30, 2020

ನಾಸ್ತಿಕನ ಪಾಡು


ದೇವನ ಬಿಟ್ಟವನಿಗೆ
ಹಿಡಿಯಲು ಏನಿಲ್ಲ
ನನ್ನ ನಂಬಿಕೆ
ನನ್ನ ವಿಶ್ವಾಸ
ಈ ಎರಡೇ
ದಾರಿ ದೀಪ

ಬಂದವು ಹಲವು
ಕಷ್ಟ
ಒಳಗೆಲ್ಲ ಸಂಕಟ
ಆದರೆ
ನ ಹೇಳಲಾರೆ
ಓ ನನ್ನ ದೇವರೇ ಕಾಪಾಡು.

ಸುಳ್ಳು ಸುಳ್ಳು
ಹೇಳಿಯಾದರೂ ನಂಬುವೆ
ಇಲ್ಲದ ದೇವರಾ
ತೊಗಲಲಿ ಆ ನರಕ

ಆದರೆ ನಾ ಹ್ಯಾಂಗೆ
ನಂಬಲಿ  ಅವನ ?
ಸುತ್ತ ನೋಡಿದರೆ ಅಳು ಗೋಳು
ಬೆಚ್ಚಿ ಬಿದ್ದ ಪುಟ್ಟ ಮರಿಗಳು
ಸುಮ್ಮನೆ ಸತ್ತು ಹೋಗುವ ಮಂದಿ
ಹಲವು ಮನೆಗಳ ದೀಪ ನಂದಿ.

ಇವೆಲ್ಲಾ ಪಾಪ ಪುಣ್ಯಗಳ ಕಂತೆಯಾದರೆ
ಅದರ ಹಿಂದೆ ಕೈ ಚೆಲ್ಲಿ
ಅಡಗಿ ಕುಳಿತ
ಆ ದೇವರ
ನಾ ಹ್ಯಾಂಗೆ ನಂಬಲಿ


 

Sunday, June 28, 2020

ಸಂಜೆ

ಸಂಜೆಯ ಬಣ್ಣ
ಮುಗಿಲಲಿ ಹರಡಿತ್ತು

ನಲ್ವತ್ತರ ಗಾಡಿಯಲ್ಲಿ
ನಾ ಈ ಮುಸ್ಸಂಜೆ ಆಗಿದ್ದೆ

ಅತ್ತ ರಾತ್ರಿಯಲ್ಲ
ಇತ್ತ ಬೆಳ ಬೆಳಗಲ್ಲ

ಬೆಳಗಿನ ನೆನಪು
ರಾತ್ರಿಯ ಭಯ

ಈ ಎರಡರ ನಡುವೆ
ನಿಂತು ಆಚೀಚೆ ಕಣ್ಣಾಡಿಸಿದೆ

ಸಮಯ ತಾನು ತಾನಾಗಿ
ಉರುಳುತ್ತಿತ್ತು

ಆ ಸಂಜೆಯ ಕೆಲವು ಕ್ಷಣಗಳ
ಮನಸಲ್ಲಿ ತುಂಬುತ್ತಾ

ಭೂತ ಭವಿಶ್ಯಗಳ  ಜಗ್ಗಾಟ
ತೊರೆದು

ಒಂದು ಲೋಟ ಕಾಫಿ ಕುಡಿದು
ಕಾಲು ಚಾಚಿ ಟಿವಿ ನೋಡಿದೆ! 

Sunday, June 21, 2020

ಕಲಿ ಅಳುವುದ

ಸುಂಸುಮನೇ ಅಳು
ಬಂದ್ರೆ
ನಾನೇನ್ ಮಾಡ್ಲಿ ?

ಒಳಗೊಳಗೇ
ಅಳಲೋ ?
ಮುಖ ಮುಚ್ಚಿ ಅಳಲೋ ?
ಬಿಕ್ಕಿ ಬಿಕ್ಕಿ ಅಳಲೋ ?

ಅಳುವುದೊಂದು ಕಲೆ ,
ಅತ್ತು ಹಗುರವಾಗುವುದು
ಎಲ್ಲರಿಗೆ ಒಲದಿಲ್ಲ .

ಸುತ್ತಾ ನೋಡಿದರೆ ,
ಅಳುವ ಬೆನ್ನ ಮೇಲೆ ಹೊತ್ತು
ನೆಡೆವರೇ ಜಾಸ್ತಿ .
ಈಗಲ್ಲ ನಾಳೆ
ಇನ್ನೊಮ್ಮೆ
ಮಗದೊಮ್ಮೆ
ಅಳುವೇ ಅನ್ನುತ್ತಾ, 
ಅಳುವ
ಬಾಕಿ ಉಳಿಸಿಕೊಂಡು, 
ಹಳೆ ಅಳುವಿಗೆ
ಹೊಸ ಅಳು
ಸೇರಿಸುತ್ತ, 
ಮೊಗವೆಲ್ಲ ಸುಕ್ಕುಕಟ್ಟಿ
ಬೆನ್ನೆಲ್ಲ ಗೂನಾಗಿ 
ಅಳುವ ಕಟ್ಟಿಹಿಡಿದು
ಕಾಯುವರು
ನನಗ ಅಳಲಿ ಎಂದು.

ಬಲು ಸುಲಭ
ಕಲಿಯಲು
ಅಳುವುದ. 
ಮಗುವೊಂದ್ನು ನೋಡು,
ಮಕ್ಕಳ ಮದ್ಯೆ ಕರಗು ,
ಹೇಳಿ ಕೊಟ್ಟಾರು
ಅಳುವದ! 

Saturday, June 20, 2020

ನಿದ್ದೆ

ಕಾಲು ಚಾಚಿ
ಕೈ ಹರಡಿ
ಕಣ್ಣು ಮುಚ್ಚಿ
ನಾ ಮಲಗಿದೆ. 

ಗಾಳಿ ಬೀಸಿ,
ಕರ ಪರ, ಚರ ಮರ ಕೇಳುತ್ತಾ, 
ಹದವಾಗಿ
ನಿದ್ದೆಗೆ
ಜಾರುತಿದ್ದೆ,

ಹಾಳಾದ ಹಳೆಯ ನೆನಪುಗಳು,
ನೋವುಗಳು,
ರಾತ್ರಿಯ ಭಯಗಳು,
ನಿದ್ದೆಯಲಿ ಕರಗಲು ಬಿಡದೆ ,
ಕಾಡಿ ಕಾಡಿ,
ಮುಚ್ಚಿದ ಕಣ್ಣೊಳಗೆ
ಕಣ್ಣ ಪಾಪೆಗಳ
ಹೊರಳಾಡುತಿತ್ತು,

ಹೊರಳಿ ಹೊರಳಿ
ಮೇಲ್ಹೊದಿಕೆ ಮುರುಡಿತ್ತು.
ಒಮ್ಮೆ ಚಳಿ
ಒಮ್ಮೆ ಸೆಕೆ
ಈ ಮಗ್ಗುಲು
ಆ ಮಗ್ಗಲು
ಎಲ್ಲೆಡೆ
ಕಪ್ಪು ಕತ್ತಲೆ.

ನಾನಾಗ ಆದೆ
ಒಂದು ಹಂಸ
ಬಿಳಿಯಾಗಿ ಹಾರಿದೆ ನಿರಂತರ. 
ನೊನೊಬ್ಬ ರಾಜಕುಮಾರ
ಆ ವನದಲ್ಲಿ ಹುಡುಕಿದೆ ಅವಳ. 
ಕೆಲವೊಮ್ಮೆ ನಾನಾದೆ
ಹನುಮಂತ.
 ಹೌದು
ಭಯವಿಲ್ಲದ ಹನುಮಂತ.
ಕಡಲುಗಳು, ಕಂದರಗಳು
ಲೆಕ್ಕವಿಲ್ಲ ನನಗೆ. 
ಆಗೊಮ್ಮೆ ಈಗೊಮ್ಮೆ
ನಾನಾದೆ ಸೂರ್ಯ
ಉಜ್ವಲವಾಗಿ
ರಾತ್ರಿಯ ಕತ್ತಲೆಯ ಕರಗಿಸುತ್ತಾ.

ಹೀಗೆಲ್ಲಾ ಮನಃಪಟಲದ
ಮೇಲೆ ಸಿನೆಮಾ ನೋಡುತ್ತಾ
ನಾ
ನಿದ್ದೆ ಹೋದೆ! 

Tuesday, June 16, 2020

ಜಗಕೆಲ್ಲ ನಾ -ರು?



ನನಗೇನು ಅಹಂಕಾರ?
ಅಲ್ಲ
ನನಗೇಕೆ ಅಹಂಕಾರ?

ಕಾರ ಸಿಹಿ ಕಹಿ ಹುಳಿ
ಎಲ್ಲ ನಂಗೊತ್ತು
ಬದುಕೆಲ್ಲಾ ಅರಿದು ಕುಡಿದೆ
ಜಗವೆಲ್ಲ ನೋಡಿ ಬಿಟ್ಟೆ
ನನ್ನಾಚೆ ಏನಿಲ್ಲ

ನೀನ್ಯಾರೋ ಹುಲು ಮಾನವ
ನಾ ಹೇಳುವೆ ಎಲ್ಲಕ್ಕೂ ಉತ್ತರ
ಕರೋನವೊ 
ಕಾಶ್ಮೀರವೊ
ಕಾರ್ಮಿಕರೋ
ಪರಿಹಾರ  ನನ್ನ ನಾಲಿಗೆ ತುದಿಯಲ್ಲಿದೆ. 

ನೀ ತಾ ಕ್ಯಾಮೆರಾ'
ಒಂದು ಮೈಕು'
ಇರಲಿ ಯೂಟ್ಯೂಬ್
ಬರಲಿ ಜನ
ಹಾಕು ಪ್ರಕರ ದೀಪ.
ಸ್ಕ್ರೀನ್ ತುಂಬಲಿ ನನ್ನ ಮುಖ
ನನ್ನ ನಗು.
ಹೊಳೆಯಲಿ ನನ್ನ ಕಣ್ಣು
ಮಿಂಚಲಿ ಗಡ್ಡದ ಕೂದಲು. 

ಆಗ ನೋಡು ನನ್ನ ಚಮತ್ಕಾರ
ಎಲ್ಲ ಸಮಸ್ಯೆಗಳ
ಕಡಿದು ಕಡಿದು
ಹಾಕುವೆ. 
ಎಲ್ಲರಿಗು ಆಹಾ ಅನಿಸಿ,
ಜಗವ ಮರೆತು
ನನ್ನ ಮುಖಾರವಿಂದವ
ಎವೆಯಿಕ್ಕದೆ ನೋಡುತ
ಜಗಕೆಲ್ಲ ನನ್ನ ಮಂತ್ರ
ಹಂಚುವರು.

ಹಸಿದವರು ಅಳುವವರು
ಮರುಗುವರು, ಗೋಳಿನವರು
ಇವರು ನಿರಂತರ.
ಅಳುವುದು ಮಹಾಪಾಪ
ಶಾಂತಂ ಪಾಪಂ. 
ನನ್ನ ಮಾತು ಅಮೃತಾಂಜನ
ಕೆಲವು ಕ್ಷಣಗಳ  ಆರಾಮ !
ನಂತರ ಇದ್ದಿದ್ದೇ ,
ದಿನ ದಿನದ ಗೋಳು. 
ಮತ್ತೆ ಮತ್ತೆ ನೋಡು
ನನ್ನ ಯೂಟ್ಯೂಬ್
ಬದುಕಲು ಕೂಳು ಬೇಕಿಲ್ಲ
ನನ್ನ ಮಾತು ಸಾಕು!!!

ಅಣ್ಣ ತಮ್ಮ

ಇಲ್ಲಿ ನೋಡೋ ಅಣ್ಣ
ಏನು ನೋಡಲಿ ತಮ್ಮಾ

ಹಕ್ಕಿಯೋ ಗುಬ್ಬಿಯೊ ಕಾಕವೋ
ಗುಪ್ಪಳಿಸುವ ಅಳಿಲೋ
ಗೋಡೆ ಮೇಲಿನ ಓತಿಕ್ಯಾತವೋ

ಯಾವಾಗಲು ನಿನ್ನ ಹಠ
ನಾ ಕಂಡಿದ್ದೆಲ್ಲ ನಿಂಗೆ ಬೇಕು
ಪುಟ್ಟ ಮಾಣಿಗೆ
ಜಾಸ್ತಿ ಪ್ರೀತಿ

ನಾ ಈಕಡೆ ನೋಡ್ತಿ
ನನ್ನ ಕಡೆನೇ ಎಲ್ಲ ಚಂದ
ನಾ  ನೋಡಿದ ಗುಬ್ಬಿ ಕೆಂಪು
ನಾ ನೋಡಿದ ಚಂದ್ರ ತಂಪು

ಒಮ್ಮೊಮ್ಮೆ ಸಿಟ್ಟು
ನೋಡಿ ನಿನ್ನ ಹಠದ ಪಟ್ಟು
ಆದರೆ
ಬೇಕಲ್ಲ ಜೊತೆಗಾರ
ಅಳಲು ಹಾಡಲು ಕುಣಿಯಲು
ನನ್ನ ತಂಟೆಗೆ ಹುಚ್ಚೆದ್ದು ನಗಲು
ರಾತ್ರಿ ಗುಸುಸು ಗುಟ್ಟು ಗುನುಗಲು
ಅಪ್ಪ ಅಮ್ಮಂಗೆ ಸಾಕ್ಷಿ ಹೇಳಲು 

Saturday, June 06, 2020

ನೋವು

ಸೊಸ-ಹುಟ್ಟಿನಲಿ ಉಳಿದವು ನೋವಿನ ಗಂಟು
ನಗುವೆಲ್ಲ ನಲಿವೆಲ್ಲ ಸೋಸಿ ಹೊಂತು

ನೋವಿನ ಗಂಟು ಕರಗದು
ಬಿಸಿ ಮಾಡಿ ನೋಡಿದೆ
ತಣಿಸಿ ನೋಡಿದೆ
ಆಳದಲ್ಲಿ ಹುಗಿದಿಟ್ಟೆ
ಮನದಲಿ ಬೇರೆ ಮನೆ ಮಾಡಿ
ಕೀಲಿ ಹಾಕಿ ಕೂಡಿಟ್ಟೆ

ಯಾವುದೊ ಕ್ಷಣದ್ಲಲಿ
ತಳದಿಂದ್ದೆದ್ದು
ಬಿರುಗಾಳಿಯಾಗಿ
ತನು ಮನವನ್ನೆಲ್ಲ ಹಿಂಡಿ
ನೋವಾಗಾಳಿ
ಹುಚ್ಚೆದ್ದು ಬೀಸಿತ್ತು

ಹುಲು ಮಾನವಾ
ತುಟಿ ಕಚ್ಚಿ
ಕಣ್ಣ ಮುಚ್ಚಿ
ಆ ಕೆಂಡದ ಮೇಲೆ ನಡಿ
ಪರ್ಯಾಯವಿಲ್ಲ ನಿನಗೆ

ದೂರದ ಕೆರೆ
ಮಗುವೊಂದರ ನಗು
ಅರಳಿದ ಹೂ
ಬೀಸಿದ ತಂಗಾಳಿ
ಸ್ವಂತನದ ನುಡಿ
ಕೈ ಹಿಡಿದು ನೆಡೆಸೀತು
ಕುಗ್ಗದಿರು ಇಂದು

Thursday, June 04, 2020

ಬೇಂದ್ರೆ

ನಾ ಆಗ ಹೊರಟೆ ಬೇಂದ್ರೆ
ಆದರೆ ಒಂದು ತೊಂದ್ರೆ

ನಾ ಎಲ್ಲಿ  ಅವರೆಲ್ಲಿ
ನಾ ಇಲ್ಲಿ ಅವರು ಸಿಂಹಾದ್ರಿಯಲಿ

ಆದರೂ ಆಸೆ
ಆ ಪದ್ಯ
ಈ ಪದ್ಯ
ಓದಿ
ನಾ ಬರೆಯಲು ಕುಂತೆ
ಬರೆದೆ
ಕಂತೆ ಕಂತೆ
ಆದರೆ ಬೇಂದ್ರೆ ರುಚಿ ಬಂತೇ ? 

Wednesday, June 03, 2020

ನಿದ್ದೆ

ಬ್ಯಾಣದಲ್ಲಿ ಬಂತು ನಿದ್ದೆ
ಹಾಸಿಗೆಯಲ್ಲಿ ಬಾರದು

ಬೀಸಿದ ಗಾಳಿ
ಚುಚ್ಚಿದಾ ಹುಲ್ಲು
ಹಕ್ಕಿಯಾ ಕೂಗು
ಆಗಾಗ ಅಲ್ಲಿಲ್ಲಿ ತುರಿಕೆ

ಬ್ಯಾಣದ ಕನಸೇ ಬೇರೆ
ಬಣ್ಣ ಕರಡಿ
ನೆನಪು ಹರಡಿ
ತೆಳು ಹದದ ಕನಸು

ಕನಸ ಸಿಹಿ ಹೆಚ್ಚಾಗಿ
ನೀರು ಬೇಕೆನಿಸಿ
ಕಣ್ಣ ಬಿಟ್ಟಾಗ
ಕಂಡದ್ದು
ಮರದ ತುದಿ
ಅದರಾಚೆ ಹರಡಿದ ನೀಲಿ

ಮೈ ಮುರಿದು ಎದ್ದೆ
ಸುತ್ತಲೂ ನೋಡಿ ಒಮ್ಮೆ ಬೆಚ್ಚಿಬಿದ್ದೆ
ನಾ ಎಲ್ಲಿದ್ದೆ ಎಂಬ ಅರಿವು ಆಗಿ
ನಗುವಾಗಿ ಮೂಕದೆಲ್ಲೆಲಾ ನಿಂತಿತ್ತು. 

Cyclone

Clone
Of
Corona, A cyclone.
Maybe
One day Corona.
Wednesday special.
All are safe,
feel like go out
and explore
the unsafe world.
Tired of being safe.
Life is short.
Chalo let’s walk
into the wind
look into the storm’s eye.
And say

I am brave.

Saturday, May 30, 2020

ನಾನು

ಕಳವಲದ ಸಮಯ
ಮನವೊ ವ್ಯಗ್ರೋಮಯ

ಚಡಪಡಿ ಕೂತಲ್ಲಿ ನಿಂತಲ್ಲಿ
ಮಲಬದ್ಧತೆ  ಆಗಿಲ್ಲಿ
ದೇಹ ಕುಂತಲ್ಲಿ
ಮನ ಹಾರುತ ಹೋಯಿತು ಮುಗಿಲಲ್ಲಿ

ನನ್ನ ಮುತ್ತಜ್ಜನ ಮುತಜ್ಜ
ಅವನ ಹಿಂದೆ ಹಲವು ತಲೆಮಾರು ಜಜ್ಜಿ
ಮುರುಡಿ ತಿರುಜಿ ಕಾಯಿಲೆ ಕಜ್ಜಿ
ಈ ಎಲ್ಲ ಕಥೆ ಹೇಳಿದ್ದಳು ನನ್ನ ಅಜ್ಜಿ

ನಾ ಇಲ್ಲಿ ಶತಮಾನ ಇಪ್ಪತ್ತೊಂದರಲ್ಲಿ
ಕರ ಕರ ಎನ್ನುತ್ತಾ ಮನದಲ್ಲಿ
ಮಹಾವಿಶ್ವದ ಎದರು ವಾಮನ ರೂಪದದಲ್ಲಿ
ಮೂರನೇ ಹೆಜ್ಜೆ ಇಡಲಿ, ಆದರೆ  ಎಲ್ಲಿ?

Friday, May 29, 2020

ಒಂದು ಸಂಜೆ

ತೀರದಲ್ಲಿ
ಅಲೆಗಳ ಬದಿಯಲ್ಲಿ
ನೆಡೆಯುತ್ತಾ
ದೂರದ ದಿಗಂತ ನೋಡುತ್ತಾ
ಮುಂದೆ
ಮುಂದೆ
ಸಾಗಿದ್ದೆ. 
ಏಕೋ
ತಿರುಗಿ
ನೋಡಿದರೆ
ನನ್ನ

ಮನಸ್ಸು
ಅಲ್ಲೇ
ಮರಳ ಮೇಲೆ ಕುಳಿತು
ಕಾಲವನು ದಾಟಿ
ಮುಸುಕಿನಾ ಸಂಜೆಯಲಿ
ಒಂದೇ ಸಮನೆ ಅಪ್ಪಳಿಸುವ ಅಲೆಗಳಲಿ
ಹಳೇ ನೆನಪುಗಳನು ತಡವಿ ತಡವಿ
ಸವಿಯುತಿತ್ತು ಬೇಯುತಿತ್ತು. 
ಹರಿದ ನೆನಪುಗಳ ಮುರಿದ ನಂಟ
ಹೇಗಾದರೂ ಮರಳಿನಿಂದಾದರೂ ಸರಿ
ಅಂಟಿಸಲು ಒದ್ದಾಡುತಿತ್ತು

ಓ ಮನಸೇ
ಬಾ
ಹೋಗುವ ಮುಂದೆ
ಇರಲಿ ನೆನಪಿನ ಕಂತೆ ಹಿಂದೆ

ನನ್ನ ನೋಡಿ
ತಿರುಚಿದ ನಗು ನಕ್ಕು
ಚೀಪಿದ ಒರಟೆ,
ಒಂತರ ರುಚಿ
ರಾತ್ರಿ ಅನ್ನ ನಿನ್ನೆ ಕುದಿಸಿದ ಸಾರು
ಏಕೋ ಈ ಎಲ್ಲ ತುಡುವು
ನನ್ನ ಬಿಡದು
ನೀ ಹೋಗು ಮುಂದೆ
ನಾ ಸ್ವಲ್ಪ ಇಲ್ಲಿ  ಕೂತು ಬಂದೆ

ಹೀಗೇ ಆ ಸಂಜೆ ರಾತ್ರಿ ಆಯ್ತು
ಮತ್ತೊಮ್ಮೆ
ನೆನಪಿನ ಲಗಾಮು
ನನ್ನ ಕೈಯಿಂದ
ಜಾರಿತ್ತು .